Tuesday, July 13, 2010

ಅಂತರಂಗದ ವೇದನೆ.....


ಮಲಗುವೆ ನಿದ್ರಿಸ ಬೇಕೆಂದಲ್ಲ ,
ಕಳೆವ ರಾತ್ರಿಯ ಬೆಳಕ ಕಾಣಬೇಕೆಂದು
ಮುಚ್ಚುವೆ ಕಣ್ಣುಗಳನು
ದೇಹದ ದಣಿವಿನಿಂದಲ್ಲ
ಕಾರಿರುಳು ಕಗ್ಗತ್ತಲೆ ನುಸುಳೀತು ಕಣ್ಣೋಳಗಿಂದ ಮನಕೆ ಎಂದು......
ಹಗಲು ಕಾಣುವ ಜಗದೊಳಗಿನ ನೋವು
ಮುಚ್ಚಿದ ಕಣ್ಣೋಳಗೆ ಕರಗಿ ನೀರಾಗಲೆಂದು......!!

--ಆಶ್ರಿತಾ ಬಂಗೇರ

No comments:

Post a Comment